ರಾಮಲಿಂಗ ರೆಡ್ಡಿ ರಾಜೀನಾಮೆ
ಡಿಕೆಶಿ ಸಚಿವ ಸಂಪುಟದ ಮೊದಲ ವಿಕೇಟ್
ಮಾತಿನಂತೆ ನಡೆದುಕೊಂಡ ರಾಮಲಿಂಗ ರೆಡ್ಡಿ
ಬೆಂಗಳೂರು, ಜೂ.05: ಡಿ.ಕೆ.ಶಿ ಅವರ ನೂತನ ಸಚಿವ ಸಂಪುಟ ಸೇರುತ್ತಿದ್ದಂತೆ ಕೇಳಿದ ಸಚಿವ ಸ್ಥಾನ ಕೊಡದೇ ಹೋದರೆ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ ರಾಮಲಿಂಗ ರೆಡ್ಡಿ ಅವರು ಇಂದು ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಯವರಿಗೆ ರವಾನಿಸುವುದರ ಮೂಲಕ ಮಾತಿಗೆ ತಕ್ಕಂತೆ ನಡೆದುಕೊಂಡಿದ್ದಾರೆ.
ನೂತನ ಸಚಿವರಿಗೆ ನಿನ್ನೆಯೇ ಖಾತೆಗಳ ಹಂಚಿಕೆಯಾಗಿದ್ದು, ರಾಮಲಿಂಗ ರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆಯನ್ನು ನೀಡಲಾಗಿತ್ತು. ನಗರಾಭಿವೃದ್ಧಿ ಇಲಾಖೆಯ ಬೇಡಿಕೆ ಇಟ್ಟಿದ್ದ ಅವರು ಜಲ ಸಂಪನ್ಮೂಲ ಇಲಾಖೆ ನೀಡಿದಕ್ಕೆ ಅಸಮಾಧಾನವಾಗಿದ್ದ ಅವರು ರಾಜೀನಾಮೆ ಮೂಲಕ ಸಾಬೀತು ಮಾಡಿದ್ದಾರೆ.
ಸಚಿವ ಸ್ಥಾನ ನೀಡಿದ್ದಕ್ಕೆ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದಗಳನ್ನು ಅರ್ಪಿಸುವುದರ ಮೂಲಕ ಆತ್ಮಸಾಕ್ಷಿಗೆ ವಿರುದ್ದವಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಕಾರಣ ನೀಡಿ, ಪಕ್ಷದ ಕಾರ್ಯಕರ್ತನಾಗಿ ಮುಂದುವರೆಯುವುದಾಗಿ ಹೇಳಿ ಡಿ.ಕೆ. ಶಿವಕುಮಾರ ಅವರಿಗೆ ಪತ್ರ ಬರೆದಿದ್ದಾರೆ.
ಡಿಕೆಶಿ ಅವರ ನೂತನ ಸಚಿವ ಮಂಡಲದಲ್ಲಿ ನಡೆದಿರುವ ಅಂತರಿಕ ಸಂಘರ್ಷಕ್ಕೆ ರಾಮಲಿಂಗ ರೆಡ್ಡಿ ಅವರ ರಾಜೀನಾಮೆ ಮೊದಲ ಪುರಾವೆಯಾಗಿದ್ದು, ಮುಂದಿನ ಬೆಳವಣಿಗೆ ರಾಜ್ಯದಲ್ಲಿ ಕುತೂಹಲ ಮೂಡಿಸಿದೆ.
ಈ ಲೇಖನ ಹಂಚಿಕೊಳ್ಳಿ