ಸಾಮರಸ್ಯ ಕೆಡಿಸುವ ಎಂಇಎಸ್, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ
ಸಂಘಟನೆಗಳು ಮೇಲಿಂದ ಮೇಲೆ ಕನ್ನಡ ವಿರೋಧಿ ಹುನ್ನಾರಗಳನ್ನು ನಡೆಸುತ್ತಲೇ ಬಂದಿವೆ. ಆ ಮೂಲಕ ಮುಗ್ಧ ಮರಾಠಿ ಬಾಂಧವರನ್ನು ದಾರಿ ತಪ್ಪಿಸಿ ಉತ್ತಮ ಬಾಂಧವ್ಯ ಹಾಳುಗೆಡುವುತ್ತಿದ್ದಾರೆ. ನಾಳೆ ನಡೆಲು ಉದ್ದೇಶಿರುವ ಹೋರಾಟಕ್ಕೆ ಜಿಲ್ಲಾ ಅಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ಕೊಟ್ಟಿದ್ದಾರೆ ಪ್ರತಿಯಾಗಿ ಕರವೇ ಸ್ವಾಭಿಮಾನ ರ್ಯಾಲಿ ನಡೆಸುವುದು ಎಂದು ಎಚ್ಚರಿಕೆ ನೀಡಲಾಗಿದೆ
ಸಾಮರಸ್ಯ ಕೆಡಿಸುವ ಎಂಇಎಸ್, ಶಿವಸೇನೆ ನಿಷೇಧಕ್ಕೆ ಕರವೇ ಆಗ್ರಹ
--
ರಾಜಕೀಯ ದುರುದ್ಧೇಶದ ಕಾರಣ ಮೇಲಿಂದ ಮೇಲೆ ಕನ್ನಡ ಭಾಷೆ, ನೆಲದ ವಿರುದ್ಧವಾದ ನಿಲುವುಗಳನ್ನು ತಾಳುವುದರ ಮೂಲಕ ಗಡಿ ಭಾಗದಲ್ಲಿ ಭಾಷಾ ಸಾಮರಸ್ಯ ಹಾಗೂ ಕನ್ನಡ – ಮರಾಠಿ ಉಭಯ ಭಾಷಿಕರ ಬಾಂಧವ್ಯ ಕೆಡಿಸುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತು ಶಿವ ಸೇನೆಯನ್ನು ಸರ್ಕಾರ ನಿಷೇಧಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ನಾಳೆ ಬೆಳಗಾವಿಯಲ್ಲಿ ಎಂಇಎಸ್ ನಡೆಸಲು ಉದ್ದೇಶಿಸಿರುವ ಮಹಾಮೋರ್ಚಾ ವಿರೋಧಿಸಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಅಧ್ಯಕ್ಷ ದೀಪಕ ಗುಡಗನಟ್ಟಿ, ಈ ಸಂಘಟನೆಗಳು ಮೇಲಿಂದ ಮೇಲೆ ಕನ್ನಡ ವಿರೋಧಿ ಹುನ್ನಾರಗಳನ್ನು ನಡೆಸುತ್ತಲೇ ಬಂದಿವೆ. ಆ ಮೂಲಕ ಮುಗ್ಧ ಮರಾಠಿ ಬಾಂಧವರನ್ನು ದಾರಿ ತಪ್ಪಿಸಿ ಉತ್ತಮ ಬಾಂಧವ್ಯ ಹಾಳುಗೆಡುವುತ್ತಿದ್ದಾರೆ. ನಾಳೆ ನಡೆಲು ಉದ್ದೇಶಿರುವ ಹೋರಾಟಕ್ಕೆ ಜಿಲ್ಲಾ ಅಡಳಿತ ಮತ್ತು ಪೊಲೀಸ್ ಇಲಾಖೆ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ಕೊಟ್ಟಿದ್ದಾರೆ ಪ್ರತಿಯಾಗಿ ಕರವೇ ಸ್ವಾಭಿಮಾನ ರ್ಯಾಲಿ ನಡೆಸುವುದು ಎಂದು ತಿಳಿಸಿದ್ದಾರೆ.
ಈ ಮಧ್ಯ ಕೆಲ ಮರಾಠಿ ಭಾಷಿಕ ಮಾಧ್ಯಮಗಳು ಕನ್ನಡಿಗರನ್ನು, ಕನ್ನಡ ಭಾಷೆಯನ್ನು ನಿಂದಿಸುವ ರೀತಿಯಲ್ಲಿ ಬರೆಯುತ್ತಿವೆ. ಅಂಥ ಮಾಧ್ಯಮಗಳಿಗೆ ಸರ್ಕಾರಿ ಜಾಹೀರಾತು ಕೊಡುವುದನ್ನು ಕೂಡಲೇ ನಿಲ್ಲಿಸಬೇಕೆಂದು ಎಂದು ದೀಪಕ ಗುಡಗನಟ್ಟಿ ಆಗ್ರಹಿಸಿದ್ದಾರೆ.
**
ಈ ಲೇಖನ ಹಂಚಿಕೊಳ್ಳಿ