ಮೇಲ್ಮನೆಗಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಸೂಚನೆ ಮುಕ್ತವಾಗಿ ಸ್ವಾಗತಿಸುವೆ: ಈರಣ್ಣ ಕಡಾಡಿ
ರಾಜ್ಯಸಭೆಗೆ ಎಮ್. ನಾಗರಾಜ್ ಹಾಗೂ ರಾಜ್ಯ ವಿಧಾನ ಪರಿಷತ್ ಗೆ ಲಿಂಗರಾಜ ಪಾಟೀಲ ಮತ್ತು ರಘು ಕೌಟಿಲ್ಯ ಅವರನ್ನು ಬಿಜೆಪಿ ಸೂಚಿಸಿದೆ
ಮೇಲ್ಮನೆಗಳ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಸೂಚನೆ ಮುಕ್ತವಾಗಿ ಸ್ವಾಗತಿಸುವೆ: ಈರಣ್ಣ ಕಡಾಡಿ
ಬೆಳಗಾವಿ : ಇದೇ ಜೂನ ತಿಂಗಳು 25 ರಂದು ತೆರವಾಗಲಿರುವ ರಾಜ್ಯಸಭೆಯ ತಮ್ಮ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಭಾರತೀಯ ಜನತಾ ಪಕ್ಷದ ಚುನಾವಣಾ ಸಮಿತಿ ಧಾರವಾಡದ ಎಂ. ನಾಗರಾಜ್ ಅವರ ಹೆಸರನ್ನು ಸೂಚಿಸಿದ್ದು, ಪಕ್ಷದ ಈ ನಿರ್ಧಾರವನ್ನು ಮುಕ್ತವಾಗಿ ಸ್ವಾಗತಿಸುವುದಾಗಿ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಪಕ್ಷಕ್ಕೆ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಶ್ರಮಿಸುತ್ತ ಬಂದ ನಾಗರಾಜ್ ಅವರು, ಹಾಲುಮತ ಸಮುದಾಯಕ್ಕೆ ಸೇರಿದವರು. ನಾಗರಾಜ್ ಅವರ ಆಯ್ಕೆ ಉತ್ತರ ಕರ್ನಾಟಕದ ಭಾಗಕ್ಕೆ ಅವಕಾಶ ಕಲ್ಪಿಸಿದೆ. ಅದಕ್ಕಾಗಿ ಪಕ್ಷದ ನಿರ್ಧಾರವನ್ನು ಮನಃಪೂರ್ವಕವಾಗಿ ಸ್ವಾಗತಿಸಿ, ಅವರಿಗೆ ಸಹಕಾರ ನೀಡುವುದಾಗಿ ತಿಳಿಸಿದರು.
ಅದೇ ರೀತಿ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಧಾರವಾಡ - ಹುಬ್ಬಳ್ಳಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವಸ್ಥ ಲಿಂಗರಾಜ್ ಪಾಟೀಲ ಅವರನ್ನು ಪಕ್ಷ ಆಯ್ಕೆ ಮಾಡಿದೆ. ಮೈಸೂರು ಭಾಗದಿಂದ ಹಿಂದುಳಿದ ವರ್ಗದ ಸಣ್ಣದಾದ ಮಡಿವಾಳ ಸಮುದಾಯದ ರಘು ಕೌಟಿಲ್ಯ ಅವರನ್ನು ಬಿಜೆಪಿ ಆಯ್ಕೆ ಮಾಡಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.
***
ಈ ಲೇಖನ ಹಂಚಿಕೊಳ್ಳಿ