ಬ್ರೇಕಿಂಗ್
70 ಸಾವಿರ ಹುದ್ದೆಗಳು, 35 ಲಕ್ಷ ಅರ್ಜಿ ನಿರೀಕ್ಷೆ: ಇಡೀ ದೇಶಕ್ಕೆ ಮಾದರಿಯಲ್ಲಿ ಅತ್ಯಂತ ಪಾರದರ್ಶಕ ನೇಮಕಾತಿ : ಸಿಎಮ್ ನಿರ್ಧಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ ಸಾಂಪ್ರದಾಯಿಕ ಆಯುಷ್ ಔಷಧಿ ಗುಣಮಟ್ಟದ ಸುಧಾರಣೆಗಾಗಿ ICMR ದಲ್ಲಿ ‌ತಜ್ಞರ ಕಾರ್ಯಾಗಾರ ಚಂಪಾ, ಕಣವಿ, ಚಿದಾನಂದಮೂರ್ತಿ ಸಮಗ್ರ ಸಾಹಿತ್ಯ ಸಂಪುಟ ಲಭ್ಯ ಬೆಳಗಾವಿ ವಾಣಿಜ್ಯೋದ್ಯಮ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ - ಸ್ವಪ್ನಿಲ್ ಶಾ ನೂತನ ಅಧ್ಯಕ್ಷ ಸಾಂಸ್ಕೃತಿಕ ಮೆರುಗು ತಂದ ಯುವ ಸೌರಭ ಗೊತ್ತುವಳಿ ಅಂಗೀಕರಿಸದಿದ್ದರೆ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಯೊಂದಿಗೆ ಚರ್ಚೆ - ಸಚಿವ ಯತೀಂದ್ರ ಸಿದ್ಧರಾಮಯ್ಯ ಎಚ್ಚರಿಕೆ ಸಕಾಲಕ್ಕೆ ಮಾಹಿತಿ‌ ಒದಗಿಸದ ತಹಶೀಲ್ದಾರ ಸೇರಿ ಮೂವರಿಗೆ ತಲಾ 10 ಸಾವಿರ ದಂಡ “ಪ್ರಾಚೀನ ಬೌದ್ಧ ತಾಣ ಸಾರನಾಥ” ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆ ಕಾರ್ಗಿಲ್ ವಿಜಯೋತ್ಸವ : ಮರಾಠಾ ಲಘು ಪದಾತಿದಳದ ಸೈನಿಕರ ಸಾಹಸ ಸುವರ್ಣಾಕ್ಷರ 70 ಸಾವಿರ ಹುದ್ದೆಗಳು, 35 ಲಕ್ಷ ಅರ್ಜಿ ನಿರೀಕ್ಷೆ: ಇಡೀ ದೇಶಕ್ಕೆ ಮಾದರಿಯಲ್ಲಿ ಅತ್ಯಂತ ಪಾರದರ್ಶಕ ನೇಮಕಾತಿ : ಸಿಎಮ್ ನಿರ್ಧಾರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಪೀಠ ಸ್ಥಾಪನೆ ಸಾಂಪ್ರದಾಯಿಕ ಆಯುಷ್ ಔಷಧಿ ಗುಣಮಟ್ಟದ ಸುಧಾರಣೆಗಾಗಿ ICMR ದಲ್ಲಿ ‌ತಜ್ಞರ ಕಾರ್ಯಾಗಾರ ಚಂಪಾ, ಕಣವಿ, ಚಿದಾನಂದಮೂರ್ತಿ ಸಮಗ್ರ ಸಾಹಿತ್ಯ ಸಂಪುಟ ಲಭ್ಯ ಬೆಳಗಾವಿ ವಾಣಿಜ್ಯೋದ್ಯಮ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ - ಸ್ವಪ್ನಿಲ್ ಶಾ ನೂತನ ಅಧ್ಯಕ್ಷ ಸಾಂಸ್ಕೃತಿಕ ಮೆರುಗು ತಂದ ಯುವ ಸೌರಭ ಗೊತ್ತುವಳಿ ಅಂಗೀಕರಿಸದಿದ್ದರೆ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಯೊಂದಿಗೆ ಚರ್ಚೆ - ಸಚಿವ ಯತೀಂದ್ರ ಸಿದ್ಧರಾಮಯ್ಯ ಎಚ್ಚರಿಕೆ ಸಕಾಲಕ್ಕೆ ಮಾಹಿತಿ‌ ಒದಗಿಸದ ತಹಶೀಲ್ದಾರ ಸೇರಿ ಮೂವರಿಗೆ ತಲಾ 10 ಸಾವಿರ ದಂಡ “ಪ್ರಾಚೀನ ಬೌದ್ಧ ತಾಣ ಸಾರನಾಥ” ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆ ಕಾರ್ಗಿಲ್ ವಿಜಯೋತ್ಸವ : ಮರಾಠಾ ಲಘು ಪದಾತಿದಳದ ಸೈನಿಕರ ಸಾಹಸ ಸುವರ್ಣಾಕ್ಷರ
01 ಆಗಸ್ಟ್ 2026
ಸಾಂಸ್ಕೃತಿಕ ಮೆರುಗು ತಂದ ಯುವ ಸೌರಭ
🎭 ಸಾಂಸ್ಕೃತಿಕ
Dr. K N Doddmani · · 91 ವೀಕ್ಷಣೆಗಳು

ಸಾಂಸ್ಕೃತಿಕ ಮೆರುಗು ತಂದ ಯುವ ಸೌರಭ

ಅಸ್ಮಿತೆ ವರದಿ, ಜು.29: ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರಂಗು ರಂಗಿನ ವೇಷ ಧರಿಸಿ ಜನಪದ ನೃತ್ಯ, ಗಾಯನ ಸೇರಿದಂತೆ ವೈವಿಧ್ಯಮಯ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನದ ಮೂಲಕ ಯುವ ಸೌರಭ ವೇದಿಕೆ ಸೃಜನಶೀಲಗೊಳಿಸಿದ ಯುವ ಸಮುದಾಯದ ಕಾರ್ಯಕ್ರಮ ಇಂದು ಬೆಳಗಾವಿ ಮಹಾಂತೇಶ ನಗರದ ಮಹಾಂತ ಭವನದಲ್ಲಿ ಜರುಗಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಮಹಾಂತೇಶ ನಗರ ರಹವಾಸಿ ಸಂಘದ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದಲ್ಲಿ ಇಂದು ಆಯೋಜಿಸಲಾದ ಯುವ ಸೌರಭ ಸಾಂಸ್ಕೃತಿಕ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ರಂಗಕರ್ಮಿ ರವಿ ಕೋಟಾರಗಸ್ತಿ, "ವಿದ್ಯಾರ್ಥಿಗಳು ಜನಪದ ಕಲೆ, ಸಾಹಿತ್ಯ ಅಭಿರುಚಿಯನ್ನು ರೂಢಿಸಿಕೊಳ್ಳಬೇಕು.ಈ ಹಿಂದೆ ಹಳ್ಳಿಗಳಲ್ಲಿ ಬಿಡುವಿನ ಸಮಯದಲ್ಲಿ ಮನರಂಜನೆಗಾಗಿ ಜನಪದ ಸಾಹಿತ್ಯ, ನೃತ್ಯ  ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಅದು ಕೇವಲ ಮನರಂಜನೆಯಾಗಿರದೇ  ನಾಡಿನ ನಡೆ ನುಡಿ ಆಚಾರ ವಿಚಾರ ಹಾಗೂ ಹಳ್ಳಿಯ ಸಾಂಸ್ಕೃತಿಕ ಸೊಗಡನ್ನು ಸಾರುವಂತಾಗುತ್ತಿತ್ತು. ಇಂದು ಮೊಬೈಲ್ ಗೀಳಿನಲ್ಲಿ ಕಾಲ ಕಳೆಯುತ್ತಿರುವ ಮಕ್ಕಳು ಮಾನಸಿಕ ಖಿನ್ನತೆ ಅನುಭವಿಸುತ್ತಿದ್ದಾರೆ. ಇದರಿಂದ ಹೊರಬಂದು ದೈಹಿಕ ಹಾಗೂ ಮಾನಸಿಕ ಸದೃಢತೆ ಸಾಧಿಸಬೇಕಾದರೆ ಕಲೆ, ಸಂಗೀತ, ಸಾಹಿತ್ಯ, ನೃತ್ಯ, ನಾಟಕ ಕ್ರೀಡೆಗಳಲ್ಲಿ ಮನಸಾರೆ ತೊಡಿಗಿಸಿಕೊಳ್ಳುವುದು ಉತ್ತಮ ಮಾರ್ಗವಾಗಿದೆ"ಎಂದು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್ ಚನ್ನೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಅಕ್ಕ ಮಹಾದೇವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಬೈಲಹೊಂಗಲ ಪ್ರಾಂಶುಪಾಲರು ಸಿ ಬಿ ಗನಾಚಾರಿ, ಮ.ನ.ರ ಸಂಘದ ಶಿಕ್ಷಣ ಮಾಹಾವಿದ್ಯಾಲಯ ಪ್ರಾಚಾರ್ಯೆ ನಿರ್ಮಲಾ ಭಟ್ಟಲ, ಸರ್ದಾರ್ ಸರ್ಕಾರಿ ಪಿ ಯು ಕಾಲೇಜಿನ ಉಪನ್ಯಾಸಕ ಹಾಗೂ ಎನ್.ಎಸ್.ಎಸ್ ಸಂಯೋಜಕ ಎಮ್.ಎಮ್ ಮುಲ್ಲಾ, ಮಾಂತ ಬಿ.ಇಡ್ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಮತ್ತು ಸರ್ದಾರ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

**

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ

ನಾಡಗೀತೆಯಲ್ಲಿ  "ಬುದ್ಧ ನಿಲ್ಲದ ಶಾಂತಿಯ ತೋಟ" ಸಾಂಸ್ಕೃತಿಕ

ನಾಡಗೀತೆಯಲ್ಲಿ "ಬುದ್ಧ ನಿಲ್ಲದ ಶಾಂತಿಯ ತೋಟ"

ಜಗತ್ತಿನಲ್ಲಿ ಇಷ್ಟೋಂದು ವೇಗವಾಗಿ ವ್ಯಾಪಿಸುತ್ತಿರುವ ಬೌದ್ಧ ಧರ್ಮ ವನ್ನು, ಕುವೆಂಪುರವರು ಏಕೆ ಕಡೆಗಣಿಸಿದರು, ಎಂಬ ಪ್ರಶ್ನೆಯನ್ನು ನಮ್ಮ ನಾಳಿನ ಪೀಳಿಗೆಯಲ್ಲಿ ನಾವೆ ಹುಟ್ಟು ಹಾಕಬಾರದು. ಬುದ್ಧನನ್ನು ಮತ್ತು ಆತನ ಧರ್ಮವನ್ನು ಅಪರಿಮಿತವಾಗಿ ಪ್ರೇಮಿಸಿದ ಕುವೆಂಪುರವರನ್ನು ಬುದ್ಧರಿಂದ ಬೇರ್ಪಡಿಸಬಾರದು.

Admin