ಚಂಪಾ, ಕಣವಿ, ಚಿದಾನಂದಮೂರ್ತಿ ಸಮಗ್ರ ಸಾಹಿತ್ಯ ಸಂಪುಟ ಲಭ್ಯ
ಅಸ್ಮಿತೆ ವರದಿ, ಜು.30: ಕನ್ನಡ ಪುಸ್ತಕ ಪ್ರಾಧಿಕಾರ ಖ್ಯಾತ ಬಂಡಾಯ ಸಾಹಿತಿ ಪ್ರೊ. ಚಂದ್ರಶೇಖರ ಪಾಟೀಲ, ಸಮನ್ವಯ ಕವಿ ಚೆನ್ನವೀರ ಕಣವಿ, ಖ್ಯಾತ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಅವರ ಸಮಗ್ರ ಸಾಹಿತ್ಯವನ್ನು ಸಂಪುಟಗಳಲ್ಲಿ ಪ್ರಕಟಿಸಿದ್ದು, ಬೆಂಗಳೂರು,ಬೆಳಗಾವಿ ಸೇರಿದಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಲಭ್ಯವಿದ್ದು ಆಸಕ್ತರು ಪಡೆದುಕೊಳ್ಳಬಹುದಾಗಿದೆ.
ಪುಸ್ತಕಗಳ ಪಟ್ಟಿ: ಪ್ರೊ. ಚಂದ್ರಶೇಕರ ಪಾಟೀಲ ಸಮಗ್ರ ಸಾಹಿತ್ಯ ಸಂಪುಟ -೧ ಕಾವ್ಯ, ಸಂಪುಟ-೨ ನಾಟಕಗಳು, ಸಂಪುಟ-೩ ಸಂಪಾದಕೀಯ/ ಅಂಕಣ ಬರಹಗಳು, ಸಂಪುಟ-೫ ಕನ್ನಡ-ಕನ್ನಡಿಗ- ಕರ್ನಾಟಕ. ಪ್ರೋ. ಚಂದ್ರಶೇಕರ ಪಾಟೀಲ ಸಮಗ್ರ ಸಾಹಿತ್ಯ ಸಂಪುಟ-೪ ಆಕೃತಿ-ಪ್ರಕೃತಿ, ಸಂಪುಟ-೬ ಸಂಕೀರಣ ಬರಹಗಳು.
ಚೆನ್ನವೀರ ಕಣವಿ ಸಮಗ್ರ ಸಾಹಿತ್ಯ ಸಂಪುಟ-೧ ಕಾವ್ಯ ಭಂಡಾರ ಭಾಗ-೧, ಭಾಗ-೨. ಚೆನ್ನವೀರ ಕಣವಿ ಸಮಗ್ರ ಸಾಹಿತ್ಯ ಸಂಪುಟ-೩ ಸಮಗ್ರ ಗದ್ಯ ಭಾಗ-೧, ಸಂಪುಟ-೪ ಸಮಗ್ರ ಗದ್ಯ ಭಾಗ-೨.
ಡಾ. ಎಂ. ಚಿದಾನಂದಮೂರ್ತಿ ಸಮಗ್ರ ಸಾಹಿತ್ಯ ಸಂಪುಟ-೧ ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ(೬ನೇ ಮುದ್ರಣ), ಕುಮಾರ ವ್ಯಾಸ ಭಾರತ ಕರ್ನಾಟ ಕಥಾ ಮಂಜರಿ ಸಂಪುಟ-೧ ಮತ್ತು ೨.
ಅದೆ ರೀತಿಯಾಗಿ ವಿವಿಧ ಪುಸ್ತಕಗಳು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಚೇರಿಯಲ್ಲಿ ಲಭ್ಯವಿದ್ದು, ಆಸಕ್ತರು ಕಚೇರಿ ಸಮಯದಲ್ಲಿ ಪುಸ್ತಕಗಳನ್ನು ಖರೀದಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
***
ಈ ಲೇಖನ ಹಂಚಿಕೊಳ್ಳಿ