ಬ್ರೇಕಿಂಗ್
ಗೊತ್ತುವಳಿ ಅಂಗೀಕರಿಸದಿದ್ದರೆ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಯೊಂದಿಗೆ ಚರ್ಚೆ - ಸಚಿವ ಯತೀಂದ್ರ ಸಿದ್ಧರಾಮಯ್ಯ ಎಚ್ಚರಿಕೆ ಸಕಾಲಕ್ಕೆ ಮಾಹಿತಿ‌ ಒದಗಿಸದ ತಹಶೀಲ್ದಾರ ಸೇರಿ ಮೂವರಿಗೆ ತಲಾ 10 ಸಾವಿರ ದಂಡ “ಪ್ರಾಚೀನ ಬೌದ್ಧ ತಾಣ ಸಾರನಾಥ” ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆ ಕಾರ್ಗಿಲ್ ವಿಜಯೋತ್ಸವ : ಮರಾಠಾ ಲಘು ಪದಾತಿದಳದ ಸೈನಿಕರ ಸಾಹಸ ಸುವರ್ಣಾಕ್ಷರ ಕಾರ್ಗಿಲ್‌ ವಿಜಯೋತ್ಸವ ನಿಮಿತ್ತ ಬೈಕ್‌ ರ್ಯಾಲಿ ವಿಶ್ವದ TEDx ಭಾಷಣಗಾರ್ತಿ ಗಿನ್ನೆಸ್ ದಾಖಲೆ ಅರ್ನಾ ಜೇವನಗೌಡರಿಗೆ ಜಿಲ್ಲಾ ಆಡಳಿತ ಸನ್ಮಾನ ಮೌಂಟ್ ಎವರೆಸ್ಟ್ ಏರಿದ ಸಂತೋಷ್ ಹಾಗೂ ಚಿನ್ಮಯಿಗೆ ಗೌರವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಲೇಬೇಕು, ಇಲ್ಲಂದ್ರೆ ಶುಲ್ಕ ಕಡಿತ : ಮುಖ್ಯಮಂತ್ರಿ ಎಚ್ಚರಿಕೆ ಸರ್ಕಾರಿ ಶಾಲೆಗಳನ್ನು ಉದ್ಯಮಿಗಳು ದತ್ತಕ ತೆಗೆದುಕೊಳ್ಳಬಹುದು : ಸಿಇಓ ಬೆಳಗಾವಿ ಜಿಲ್ಲೆಯ 175 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ  ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧಾರ ಗೊತ್ತುವಳಿ ಅಂಗೀಕರಿಸದಿದ್ದರೆ ಕಠಿಣ ಕ್ರಮಕ್ಕೆ ಮುಖ್ಯಮಂತ್ರಿಯೊಂದಿಗೆ ಚರ್ಚೆ - ಸಚಿವ ಯತೀಂದ್ರ ಸಿದ್ಧರಾಮಯ್ಯ ಎಚ್ಚರಿಕೆ ಸಕಾಲಕ್ಕೆ ಮಾಹಿತಿ‌ ಒದಗಿಸದ ತಹಶೀಲ್ದಾರ ಸೇರಿ ಮೂವರಿಗೆ ತಲಾ 10 ಸಾವಿರ ದಂಡ “ಪ್ರಾಚೀನ ಬೌದ್ಧ ತಾಣ ಸಾರನಾಥ” ಯುನೆಸ್ಕೋ ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆ ಕಾರ್ಗಿಲ್ ವಿಜಯೋತ್ಸವ : ಮರಾಠಾ ಲಘು ಪದಾತಿದಳದ ಸೈನಿಕರ ಸಾಹಸ ಸುವರ್ಣಾಕ್ಷರ ಕಾರ್ಗಿಲ್‌ ವಿಜಯೋತ್ಸವ ನಿಮಿತ್ತ ಬೈಕ್‌ ರ್ಯಾಲಿ ವಿಶ್ವದ TEDx ಭಾಷಣಗಾರ್ತಿ ಗಿನ್ನೆಸ್ ದಾಖಲೆ ಅರ್ನಾ ಜೇವನಗೌಡರಿಗೆ ಜಿಲ್ಲಾ ಆಡಳಿತ ಸನ್ಮಾನ ಮೌಂಟ್ ಎವರೆಸ್ಟ್ ಏರಿದ ಸಂತೋಷ್ ಹಾಗೂ ಚಿನ್ಮಯಿಗೆ ಗೌರವ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ಕಡ್ಡಾಯವಾಗಿ ದತ್ತು ತೆಗೆದುಕೊಳ್ಳಲೇಬೇಕು, ಇಲ್ಲಂದ್ರೆ ಶುಲ್ಕ ಕಡಿತ : ಮುಖ್ಯಮಂತ್ರಿ ಎಚ್ಚರಿಕೆ ಸರ್ಕಾರಿ ಶಾಲೆಗಳನ್ನು ಉದ್ಯಮಿಗಳು ದತ್ತಕ ತೆಗೆದುಕೊಳ್ಳಬಹುದು : ಸಿಇಓ ಬೆಳಗಾವಿ ಜಿಲ್ಲೆಯ 175 ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ  ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧಾರ
29 ಜುಲೈ 2026
ಪದ್ಮಶ್ರೀ ಪ್ರಶಸ್ತಿ:  ಪ್ರಭಾಕರ ಕೋರೆಯವರಿಗೆ ಅದ್ದೂರಿ ಸನ್ಮಾನ; ಕೆ.ಎಲ್.ಇ. ಸಂಸ್ಥೆಯ110 ವರ್ಷಗಳ ಇತಿಹಾಸದಲ್ಲಿ ಸಾಮಾಜಿಕ ಅಗಮ್ಯೆ ಕಾಳಜಿ ಅಡಗಿದೆ : ಪ್ರಭಾಕರ ಕೋರೆ
📄 ಬೆಳಗಾವಿ ಜಿಲ್ಲೆಯ ಸುದ್ದಿ
Dr. K N Doddmani · · 78 ವೀಕ್ಷಣೆಗಳು

ಪದ್ಮಶ್ರೀ ಪ್ರಶಸ್ತಿ: ಪ್ರಭಾಕರ ಕೋರೆಯವರಿಗೆ ಅದ್ದೂರಿ ಸನ್ಮಾನ; ಕೆ.ಎಲ್.ಇ. ಸಂಸ್ಥೆಯ110 ವರ್ಷಗಳ ಇತಿಹಾಸದಲ್ಲಿ ಸಾಮಾಜಿಕ ಅಗಮ್ಯೆ ಕಾಳಜಿ ಅಡಗಿದೆ : ಪ್ರಭಾಕರ ಕೋರೆ

ಅಸ್ಮಿತೆ ವರದಿ , ಜು.17: ಹಿರಿಯ ರಾಜಕೀಯ ಧುರೀಣ, ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರೂವಾರಿ ಪ್ರಭಾಕರ ಕೋರೆ ಅವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ ಕಾರಣ ಇಂದು ಬೆಳಗಾವಿಯಲ್ಲಿ ಗೋಗಟೆ ಸಮೂಹ ಸಂಸ್ಥೆ, ಸ್ಪೋಟ್ಸ್‌ ಕ್ಲಬ್‌, ಬಾಡಿ ಬಾಲ್ಡರ್ಸ್‌ ಸಂಸ್ಥೆ, ಬೆಳಗಾವಿ ಶೈಕ್ಷಣಿಕ ಸಂಸ್ಥೆ ಮತ್ತು ರೋಟರಿ ಕ್ಲಬ್‌ ಸಹಯೋಗದಲ್ಲಿ ಸ್ವರೂಪ ನರ್ತಕಿ ಚಿತ್ರ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅದ್ದೂರಿಯಾದ ಗೌರವ ಸನ್ಮಾನ ನೆರವೇರಿಸಲಾಯಿತು.

ಬೆಳಗಾವಿ ಮರಾಠಾ ಲಘು ಪದಾತಿದಳದ ಕಮಾಂಡರ್‌ ಬ್ರಿಗೇಡಿಯರ್‌ ಗಿರೀಶ್‌ ಉಪಾಧ್ಯಾಯ, ಅವಿನಾಷ ಪೋತದಾರ, ಶಿರೀಶ್‌ ಗೋಗಟೆ ಹಾಗೂ ಪ್ರಭಾಕ ಕೋರೆ ಅವರ ಪತ್ನಿ ಆಶಾ ಕೋರೆ, ಮಗಳು ಪ್ರೀತಿ ಕೋರೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಭಾಕರ ಕೋರೆ ಅವರು, 110 ವರ್ಷಗಳ ಹಿಂದೆ ಸಾಮಾಜಿಕ ಅಗಮ್ಯೆ ಕಾಳಜಿಯಿಂದ ತುಂಬಾ ಕಷ್ಟಪಟ್ಟು ಕೆ.ಎಲ್.ಇ. ಸಂಸ್ಥೆಯನ್ನು  ಆರಂಭಿಸಿದ್ದು ಇಂದು ಶೈಕ್ಷಣಿಕ ಹಾಗೂ ಆರೋಗ್ಯದ ಗಮನಾರ್ಹ ಸೇವೆಯೊಂದಿಗೆ ನಾಡಿನ ಪ್ರಮುಖ ಸಂಸ್ಥೆಯಾಗಿ ಬೆಳೆದ 12 ಸಾವಿರ ಜನರು ಸದಸ್ಯರಿದ್ದಾರೆ. ತಂದೆಯ ಶೈಕ್ಷಣಿಕ ಕಾಳಜಿಯ ಪ್ರೇರಣೆ ಹಾಗೂ ಅಣ್ಣನ ಸಾವಿನಿಂದ ನೊಂದ ನಾನು ಕೆ.ಎಲ್.‌ ಇ. ಸಂಸ್ಥೆಯ ಮೂಲಕ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣ ಹಾಗೂ ಉತ್ತಮ ಆರೋಗ್ಯ ಸೇವೆ ಒದಗಿಸಬೇಕೆಂಬ ಮಹದ್ದೇಶದೊಂದಿಗೆ ನಿರಂತರ ಶ್ರಮದ ಕಾರಣ ಸಂಸ್ಥೆ ಬೆಳೆಸಲು ಸಾಧ್ಯವಾಗಿದೆ. ಇಂದು ನೆರೆಯ ರಾಜ್ಯಗಳನ್ನು ಒಳಗೊಂಡು ಕರ್ನಾಟಕದಲ್ಲಿ ಸಂಸ್ಥೆ 320 ಶೈಕ್ಷಣಿಕ ಸಂಸ್ಥೆಗಳನ್ನು ಹೊಂದಿದ್ದು, ಇದರಲ್ಲಿ ಪ್ರತಿಶತ 40 ರಷ್ಟು ಗ್ರಾಮೀಣ ಭಾಗದಲ್ಲಿವೆ. ರೈತರ ಶ್ರೇಯೋಭಿವೃದ್ಧಿ ಪ್ರಧಾನ ಆಶಯ ಹೊಂದಿದ ಸಹಕಾರಿ ಸಕ್ಕರೆ ಕಾರ್ಖಾನೆ ನಿತ್ತ 12 ಸಾವಿರ ಟನ್‌ ಕಬ್ಬು ನುರಿಸುತ್ತಿದ್ದೆ. ಅತ್ಯಾಧುನಿಕ ಸೌಕರ್ಯದೊಂದಿನ ಆಸ್ಪತ್ರೆ ಎಲ್ಲ ವರ್ಗದವರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುತ್ತಿದೆ ಎಂದು ತಿಳಿಸಿದರು.

ಬ್ರಿಗೇಡಿಯರ್‌ ಗಿರೀಶ್‌ ಉಪಾಧ್ಯಾಯ, ಉತ್ತಮ ವಾತಾರಣ ಹೊಂದಿರುವ ಬೆಳಗಾವಿ ಜಿಲ್ಲೆ  ಎಲ್ಲ ಬಗೆಯ ಅನುಕೂಲತೆಗಳನ್ನು  ಹೊಂದಿದೆ. ಜಿಲ್ಲೆಯಲ್ಲಿ ಆಧುನಿಕ ಸೌಕರ್ಯಗಳನ್ನು ಒದಗಿಸುವಲ್ಲಿ ಕೆ.ಎಲ್.ಇ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ.  ಸಾಮಾಜಿಕ ಸೇವೆಯಲ್ಲಿ ವಿಶೇಷ ತೊಡಗಿಸಿಕೊಂಡಿರುವ ಸಂಸ್ಥೆಯ ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೇವೆಯನ್ನು ಒದಗಿಸುತ್ತಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

***

ಈ ಲೇಖನ ಹಂಚಿಕೊಳ್ಳಿ

ಇನ್ನಷ್ಟು ಓದಿ