ಕಾರ್ಗಿಲ್ ವಿಜಯೋತ್ಸವ ನಿಮಿತ್ತ ಬೈಕ್ ರ್ಯಾಲಿ
ಅಸ್ಮಿತೆ ವರದಿ, ಜು.25: ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟದ ಆಶ್ರಯದಲ್ಲಿ ಕಾರ್ಗಿಲ್ ವಿಜಯೋತ್ಸವ ನಿಮಿತ್ಯ ಇಂದು ಸಂಜೆ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ರೈತ ಮುಖಂಡ ವೀರಣ್ಣ ರೊಟ್ಟಿ ಅವರು ಬಸವಣ್ಣವರ ಪ್ರತಿಮೆ ಹಾಗೂ ಅಮರ ಜವಾಜ್ ಜ್ಯೋತಿಗೆ ಪುಷ್ಪಾರ್ಪಣೆ ಮಾಡಿ ರಾಷ್ಟ್ರಧ್ವನಿ ಪ್ರದರ್ಶಿಸುವುದರ ಮೂಲಕ ರ್ಯಾಲಿಗೆ ಚಾಲನೆ ನೀಡಿದರು.
ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಅಧ್ಯಕ್ಷ ಜಗದೀಶ ಪೂಜಾರಿ ಸೇರಿದಂತೆ ಜಿಲ್ಲೆಯ ಮಾಜಿ ಸೈನಿಕರು, ಹಸಿರು ಸೇನೆಯ ಪದಾಧಿಕಾರಿಗಳು, ಮಹಿಳೆಯರು ಪಾಲ್ಗೊಂಡಿದ್ದರು. ಗೋವಾವೆಸ್ ಬಸವೇಶ್ವರ ವತ್ತದಿಂದ ಹೊರಟ ರ್ಯಾಲಿ, ಗೋಗಟೆ ವೃತ್ತ, ಕಾಲೇಜು ರಸ್ತೆ, ಚೆನ್ನಮ್ಮ ವೃತ್ತ, ಕೃಷ್ಣದೇವರಾಯ ವೃತ್ತದ ಮೂಲಕ ಸಾಗಿ ಧರ್ಮನಾಥ ಭವನದ ಹತ್ತಿರ ಕೊನೆಗೊಂಡಿತು.

ವೀರಣ್ಣ ರೊಟ್ಟಿ, "೧೯೯ರಲ್ಲಿನ ಕಾರ್ಗಿಲ್ ಹೋರಾಟದ ಸ್ಮರಣೆ ಹಾಗೂ ಗೌರವ ನಮನದ ಕಾರಣ ಕಾರ್ಗಿಲ್ ವಿಜೋತ್ಸವ ಆಚರಿಸುತ್ತ ಬರಲಾಗಿದೆ. ಯೋಧರ ಶ್ರಮ, ಹೋರಾಟದ ಯುವ ಸಮುದಾಯಕ್ಕೆ ಪ್ರೇರಣೆಯಾಗಬೇಕು. ಯೋಧರ ಬಗ್ಗೆ ಸಮಾಜದಲ್ಲಿ ಗೌರವ ಭಾವನೆ ಮೂಡಬೇಕು. ಕಾರ್ಗಿಲ್ ಹೋರಾಟದ ಸಂದರ್ಭದಲ್ಲಿ ಹೋರಾಡಿ ಮಡಿದ ಕುಟುಂಬ ವರ್ಗಕ್ಕೆ ಹಾಗೂ ಅಂಗವಿಕರಾದ ಯೋಧರಿಗೆ ಸರ್ಕಾರದಿಂದ ಸೂಕ್ತ ಗೌರ ದೊರೆಯಬೇಕು" ಎಂದು ತಿಳಿಸಿದರು.
ಜಗದೀಶ್ ಪೂಜಾರಿ, "ಕಾರ್ಗಿಲ್ ವಿಜಯೋತ್ಸವದ ನಿಮಿತ್ಯ ಬೈಕ್ ರ್ಯಾಲಿ ಸೇರಿ ವಿವಿಧ ಕಾರ್ಯಕ್ರಮಗಳನ್ನು ಎರಡು ದಿನಗಳ ವರೆಗ ಅದ್ದರಿಯಾಗಿ ಆಯೋಜಿಸಲಾಗಿದೆ. ಯುವ ಸಮುದಾಯದಲ್ಲಿ ದೇಶಪ್ರೇಮ ಪ್ರೇರಣೆಗೊಸ್ಕರ ವಿಜಯೋತ್ಸವವನ್ನು ಸಡಗರದಿಂದ ಆಯೋಜಿಸಲಾಗಿದೆ" ಎಂದು ತಿಳಿಸಿದರು.
***
ಈ ಲೇಖನ ಹಂಚಿಕೊಳ್ಳಿ