ಲಕ್ಷಾಂತರ ಸಮಸ್ಯೆಗಳು ಕಂದಾಯ ಇಲಾಖೆಯ ಮುಂದೆ ಹಾಗೇ ಬಿದ್ದಿವೆ; ಗೊಲ್ಲರ ಹಟ್ಟಿಗಳಿಗೆ ಇದುವರೆಗೆ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ : ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ
ಕಂದಾಯ ದಿನಾಚರಣೆಯನ್ನು ಅಧಿಕಾರಿಗಳಾದ ತಾವು ಏನೆಂದು ಭಾವಿಸಿರುವಿರೋ ಗೊತ್ತಿಲ್ಲ. ಆದರೆ, ಜನರ ಹತ್ತಿರ ಹೋಗಿ ಜನಪರ ಸೇವೆಯ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸುವುದನ್ನು ನೆನಪಿಸಿಕೊಳ್ಳುವುದು ಅದರ ಉದ್ದೇಶವಾಗಿದೆ. ಈ ಉದ್ದೇಶದಿಂದಲೇ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಹನ್ನೊಂದು ವರ್ಷಗಳ ಹಿಂದೆ ಕಂದಾಯ ದಿನಾಚರಣೆಯನ್ನು ಆರಂಭಿಸಿದ್ದರು - ಪರಮೇಶ್ವರ
ಲಕ್ಷಾಂತರ ಸಮಸ್ಯೆಗಳು ಕಂದಾಯ ಇಲಾಖೆಯ ಮುಂದೆ ಹಾಗೇ ಬಿದ್ದಿವೆ; ಗೊಲ್ಲರ ಹಟ್ಟಿಗಳಿಗೆ ಸೌಕರ್ಯ ಒದಗಿಸಲು ಸಾಧ್ಯವಾಗಿಲ್ಲ : ಉಪ ಮುಖ್ಯಮಂತ್ರಿ ಜಿ.
ಅಸ್ಮಿತೆ ಸುದ್ದಿ : ಭೂಮಿಗೆ ಸಂಬಂಧಿಸಿದ ಲಕ್ಷಾಂತರ ಸಮಸ್ಯೆಗಳು ಆಧುನಿಕ ಕಂದಾಯ ವ್ಯವಸ್ಥೆಯಲ್ಲಿ ಹಲವಾರು ವರ್ಷಗಳಿಂದ ಎದುರು ಹಾಗೇ ಉಳಿದುಕೊಂಡು ಬಂದಿವೆ. ಸಕಾಲಕ್ಕೆ ಅವುಗಳಿಗೆ ಸೂಕ್ತ ಪರಿಹಾರ ಒದಗಿಸಲು ಸಾಧ್ಯವಾಗಿಲ್ಲ. ಅದಕ್ಕೆ ಅದರದೇ ಆದ ಅನೇಕ ಕಾರಣಗಳಿವೆ. ಆದರೆ, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಎದುಗಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳವ ಕೆಲಸವನ್ನು ಕಂದಾಯ ಇಲಾಖೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಕಂದಾಯ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ತಿಳಿಸಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ಇಂದು ಆಯೋಜಿಸಲಾದ ಕಂದಾಯ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮಗಳಿಗೆ ಹೊಂದಿಕೊಂಡು ಹೊರವಲಯದಲ್ಲಿರುವ ಗೊಲ್ಲರ ಹಟ್ಟಿಗಳಿಗೆ ಇಂದಿಗೂ ಅವಶ್ಯಕ ಸೌಕರ್ಯಗಳನ್ನು ಒದಗಿಸಿ ಕಂದಾಯ ಗ್ರಾಮದ ವ್ಯಾಪ್ತಿಗೆ ತರಲು ಸಾಧ್ಯವಾಗದೇ ಇರುವುದು ಕಂದಾಯ ಇಲಾಖೆಯ ವ್ಯವಸ್ಥೆಯ ಲೋಪವನ್ನು ಸೂಚಿಸುತ್ತದೆ. ನನ್ನ ಕ್ಷೇತ್ರದಲ್ಲಿಯೇ ಸುಮಾರು ೨೫ ಗೊಲ್ಲರಹಟ್ಟಿಗಳು ಕಂದಾಯ ಗ್ರಾಮದ ವ್ಯಾಪ್ತಿಯಿಂದ ಹೊರಗುಳಿದಿವೆ ಎಂದು ವಿಷಾದ ವ್ಯಕ್ತಪಡಿಸಿದರು.

ಮಹಾಭಾರತದಂತ ಪುರಾಣದ ಕಾಲದಿಂದಲೂ ಕಂದಾಯ ವ್ಯವಸ್ಥೆ ಚರಿತ್ರೆಯಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ರಾಜಮಹಾರಾಜರು ಕಂದಾಯ ವ್ಯವಸ್ಥೆಯನ್ನು ಅನುಸರಿಸಿ ಯಾವುದೇ ತಾಂತ್ರಿಕ ಸೌಲಭ್ಯವಿಲ್ಲದೆ ಭೂನಕಾಶೆಗಳನ್ನು ಸೃಷ್ಟಿಸಿದ್ದರು. ಆಧುನಿಕ ಸಂದರ್ಭದಲ್ಲಿ ಅಂದಿನ ಐತಿಹಾಸಿಕ ನೀಲಿ ನಕ್ಷೆಗಳು ಆಧಾರವಾಗಿ ಬಳಸಲಾಗುತ್ತಿದೆ. ತಾಂತ್ರಿಕತೆ ಸಾಕಷ್ಟು ಅಭಿವೃದ್ಧಿ ಹೊಂದಿದೆ. ಅದರ ಸಹಾಯದಿಂದ ಲೋಪಗಳನ್ನು ಸರಿಪಡಿಸಿ ಎದುರಿಗಿರುವ ಲಕ್ಷಾಂತ್ರ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳುವ ಪ್ರಾಮಾಣಿಕ ಕೆಲಸ ಇಲಾಖೆಯಿಂದ ನಡೆಯಬೇಕಾಗಿದೆ.
ಕಂದಾಯ ದಿನಾಚರಣೆ ಅಧಿಕಾರಿಗಳಾದ ತಾವು ಏನೆಂದು ಭಾವಿಸಿರುವಿರೋ ಗೊತ್ತಿಲ್ಲ. ಆದರೆ, ಜನರ ಹತ್ತಿರ ಹೋಗಿ ಜನರ ಸೇವೆಯ ಜವಾಬ್ದಾರಿಯನ್ನು ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ನಿರ್ವಹಿಸುವುದನ್ನು ನೆನಪಿಸಿಕೊಳ್ಳುವುದು ಅದರ ಉದ್ದೇಶವಾಗಿದೆ. ಈ ಉದ್ದೇಶದಿಂದಲೇ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರು ಹನ್ನೊಂದು ವರ್ಷಗಳ ಹಿಂದೆ ಕಂದಾಯ ದಿನಾಚರಣೆಯನ್ನು ಆರಂಭಿಸಿದ್ದರು ಎಂದು ಡಾ. ಜಿ. ಪರಮೇಶ್ವರ ತಿಳಿಸಿದರು.
ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ನೌಕರರಿಗೆ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕ ನೌಕರ ವರ್ಗಕ್ಕೆ ಫಲಪುಷ್ಪ ನೀಡಿ ಗೌರವಿಸಲಾಯಿತು. ಪತ್ರಿಕಾ ದಿನಾಚರಣೆ ನಿಮಿತ್ಯ ಆಯ್ದ ಪತ್ರಕರ್ತರಿಗೆ ಕಿಟ್ ವಿತರಣೆಯನ್ನು ಉಪ ಮುಖ್ಯಮಂತ್ರಿ ನೆರವೇರಿಸಿದರು.
ಈ ಲೇಖನ ಹಂಚಿಕೊಳ್ಳಿ